ಹಣೆ ಬರಹದೊಳಗಿರುವ ಕಳೆಯ ಕಿತ್ತೊಗೆಯಬೇಕು
ಹಣದಮಲ ನಶೆಯ ಆಚೆ ದೂಡಬೇಕು
ಬೆಲೆಮಾತನಾಡುವವರ ಬಿಟ್ಟುಬಿಡಬೇಕು
ಬೆಲೆಸಿಗದ ತಾಣದ ಆಸೆ ಬಿಡಬೇಕು
ಅಂಬಿಗನ ನಂಬಿ ಮುಂದೆ ನಡಿಬೇಕು
ದುಡಿಮೆಯ ನೆಚ್ಚಿ ಸಾಗುತಿರಬೇಕು
ನಂಬಿಕೆಯ ಕೈಯ ಹಿಡಿದು ನಡೆಬೇಕು
ಸಜ್ಜನರ ಹಾದಿಯಲಿ ಸಾಗುತಿರಬೇಕು
ಸಂಗಮೇಶನ ಆಸರೆ ಬೇಡುತಿರಬೇಕು
ಒಳ್ಳೆಯತನಕೆ ಕೈ ಮುಗಿಯಬೇಕು
ಅನ್ನದ ಅಗುಳಿಗೆ ತಲೆಬಾಗಬೇಕು
ರೈತನ ಕಷ್ಟಕೆ ಹೆಗಲಾಗಬೇಕು
ಕೊನೆತನಕ ಹೀಗೆ ಇದ್ದುಬಿಡಬೇಕು
ಮೂರು ದಿವಸದ ಬದುಕು ಹಸನಾಗಬೇಕು.
©Raghu Shivaswamy
#Butterfly ಹಣೆ ಬರಹದೊಳಗಿರುವ ಕಳೆಯ ಕಿತ್ತೊಗೆಯಬೇಕು
ಹಣದಮಲ ನಶೆಯ ಆಚೆ ದೂಡಬೇಕು
ಬೆಲೆಮಾತನಾಡುವವರ ಬಿಟ್ಟುಬಿಡಬೇಕು
ಬೆಲೆಸಿಗದ ತಾಣದ ಆಸೆ ಬಿಡಬೇಕು
ಅಂಬಿಗನ ನಂಬಿ ಮುಂದೆ ನಡಿಬೇಕು
ದುಡಿಮೆಯ ನೆಚ್ಚಿ ಸಾಗುತಿರಬೇಕು
ನಂಬಿಕೆಯ ಕೈಯ ಹಿಡಿದು ನಡೆಬೇಕು
ಸಜ್ಜನರ ಹಾದಿಯಲಿ ಸಾಗುತಿರಬೇಕು